ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಸಂರಕ್ಷಣೆಗೆ ಹೊಂಡ ನಿರ್ಮಾಣಕ್ಕೆ ಮುಂದಾದ ‘ಜೀವನಾಡಿ’

Last Updated 3 ಏಪ್ರಿಲ್ 2019, 15:11 IST
ಅಕ್ಷರ ಗಾತ್ರ

ತುಮಕೂರು: ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುಮಕೂರು ತಾಲ್ಲೂಕಿನ ತಮ್ಮಡಿಹಳ್ಳಿ ಬೆಟ್ಟದಲ್ಲಿ ಹೊಂಡಗಳ ನಿರ್ಮಾಣ(ಜೋಹಾಡ್‌) ಕುರಿತಂತೆ 35 ಯುವಕರ ‘ಜೀವನಾಡಿ’ ತಂಡವು ಈಚೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ವಿರಕ್ತಮಠದಲ್ಲಿ ಪೂರ್ವ ಭಾವಿ ಸಭೆ ನಡೆಸಿತು.

ದಶಕಗಳಿಂದ ಪರಿಸರದಲ್ಲಿ ವೈಫರಿತ್ಯ ಆಗಿದೆ. ಇದಕ್ಕೆ ತುಮಕೂರು ಜಿಲ್ಲೆಯೇನು ಹೊರತಲ್ಲ. ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಬಿಸಿಲ ತಾಪ ಏರುಗತಿಯಲ್ಲಿದ್ದು, ಅರಣ್ಯ ವಲಯಗಳು ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಈ ಜಿಲ್ಲೆಯ ಯುವಜನರು ಒಗ್ಗೂಡಬೇಕು ಎಂದು ಸಭೆಯು ಅಭಿಪ್ರಾಯಪಟ್ಟಿತು.

ಬಳಿಕ ತಮ್ಮಡಿಹಳ್ಳಿಯಲ್ಲಿ ಬೆಟ್ಟದಲ್ಲಿ ಜೀವನಾಡಿ ತಂಡದ ಯುವಕರ ಪಡೆಯು ಹೊಂಡಗಳನ್ನು ನಿರ್ಮಿಸುವ ಮೂಲಕ ಜಲಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿತು. ಬೆಟ್ಟದ ಮೇಲೆ ಬಿದ್ದ ಮಳೆ ನೀರು ಭೂಮಿಗೆ ಇಂಗಲು ಗಿಡಗಳನ್ನು ನೆಡಲು ತೀರ್ಮಾನ ಮಾಡಿತು.

ಸಹಜ ಬೇಸಾಯ ಶಾಲೆಯ ಹಿರಿಯ ಪರಿಸರ ತಜ್ಞ ಸಿ.ಯತಿರಾಜು, ಡಾ.ಮಂಜುನಾಥ್, ಶಿಕ್ಷಕರಾದ ರಾಮಕೃಷ್ಣಪ್ಪ, ಇಂದಿರಮ್ಮ ಸೇರಿದಂತೆ ಅನೇಕ ಹಿರಿಯರು ಮಾರ್ಗದರ್ಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT