‘ಚುನಾವಣೆ ಹೊಸ್ತಿಲಲ್ಲಿ ಇರುವಾಗ ಆತುರದ ತೀರ್ಮಾನ ಅಗತ್ಯವಿತ್ತೆ. ಮುಖ್ಯಮಂತ್ರಿಯವರು ಒಗ್ಗಟ್ಟಾಗಿ ಬಂದರೆ ಶಿಫಾರಸು ಮಾಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ತಜ್ಞರ ಸಮಿತಿ ನೇಮಿಸಿದರು. ಅದರಲ್ಲಿ ನಮ್ಮ ಧರ್ಮಕ್ಕೆ ಸಂಬಂಧಿಸಿದ ಒಬ್ಬ ತಜ್ಞರನ್ನೂ ಸೇರಿಸಲಿಲ್ಲ. ಆರು ತಿಂಗಳ ಕಾಲಾವಕಾಶ ನೀಡಿ. ಕೊನೆಗೆ ತರಾತುರಿಯಲ್ಲಿ ವರದಿ ಪಡೆದರು’ ಎಂದು ಅವರು ದೂರಿದರು.