ಹಿರಿಯೂರು ತಾಲ್ಲೂಕಿನ ಮುದಿಯಪ್ಪನ ಕೊಟ್ಟಿಗೆ ಗ್ರಾಮದದವರಾದ ದಂಪತಿ ಹಾಗೂ ಮಗಳು ಊಮನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಬಂದಿದ್ದರು. ಮಾರ್ಚ್ 24ರಂದು ಲಾಕ್ಡೌನ್ ಆಗಿದ್ದರಿಂದ ವಾಹನಗಳು ಇಲ್ಲದ ಕಾರಣ ದೇವಾಲಯದಲ್ಲಿಯೇ ತಂಗಿದ್ದರು.
ಆಗ ಬಸವರಾಜ ತನ್ನ ಪತ್ನಿಯ ಶೀಲ ಶಂಕಿಸಿ ದೇವಸ್ಥಾನದ ಸಮೀಪ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಪತ್ನಿ ಶೀಲದ ವಿಚಾರವಾಗಿ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.