ಇಲಾಖೆಯ 18 ಬಗೆಯ ಸೇವೆಗಳನ್ನು ಮಾಡಿಕೊಂಡು ಬಂದಿರುವ ನಾವು ಸರ್ಕಾರಿ ಭೂಮಾಪಕರಷ್ಟೇ ಅರ್ಹತೆ ಹೊಂದಿದ್ದೇವೆ. ನಮಗೆ ಫೈಲ್ ಆಧಾರದ ಮೇಲೆ ಕೂಲಿ ನೀಡದೆ ಕನಿಷ್ಠ ವೇತನ, ಸೇವಾ ಭದ್ರತೆ ಒದಿಗಿಸಬೇಕು.
–ಜಿ. ಸಂತೋಷ್, ತಾಲ್ಲೂಕು ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ
ಯಾವುದೇ ಮುಷ್ಕರ ನಡೆದರೂ ಅದರ ಮೊದಲ ಬಲಿಪಶು ರೈತರೇ ಆಗಿರುತ್ತಾರೆ. ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದ ಜನರು ಈ ಮುಷ್ಕರದಿಂದ ಸಬ್ಸಿಡಿ, ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದಾರೆ.