‘ಭೂಬಾಲನ್ ಕೆಲವು ಗುತ್ತಿಗೆದಾರರಿಗೆ ದಂಡ ಹಾಕಿದ್ದರು. ಗುತ್ತಿಗೆದಾರರ ಅಕ್ರಮಗಳಿಗೆ ಕಡಿವಾಣ ಬಿದ್ದಿತ್ತು. ಕೆಲ ರಾಜಕೀಯ ವ್ಯಕ್ತಿಗಳ ವ್ಯವಹಾರಕ್ಕೂ ತಡೆಯಾಗಿದ್ದರು. ರಾತ್ರಿ ಎಂಟು ಗಂಟೆಯಾದರೂ ಕಚೇರಿಯಲ್ಲಿಯೇ ಇರುತ್ತಿದ್ದರು. ಎಲ್ಲ ಕಾಮಗಾರಿಗಳ ಮೇಲೆ ನಿಗಾ ಇಟ್ಟಿದ್ದರು. ಇವರು ಇದ್ದರೆ ನಮ್ಮ ಮಾತು ನಡೆಯುವುದಿಲ್ಲ, ನಮ್ಮ ಮನೆಗಳಿಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಸ್ಮಾರ್ಟ್ಸಿಟಿ ಹುದ್ದೆಯಿಂದ ತೆರವುಗೊಳಿಸಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಇಮ್ರಾನ್ ಪಾಷಾ ತಿಳಿಸಿದರು.