ಹಬ್ಬ ಹರಿದಿನಗಳು ಮತ್ತು ವಾರ್ಷಿಕ ಸಂಭ್ರಮಾಚರಣೆಗಳು ನಮ್ಮ ಮನಸ್ಸಿನ ಆತಂಕ, ದುಗುಡ ಬೇಸರಗಳನ್ನು ಕಡಿಮೆಗೊಳಿಸಿ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದು ಮನೋಚಿಕಿತ್ಸಕಿ ಡಾ.ಜಿ.ಪದ್ಮಾಕ್ಷೀ ತಿಳಿಸಿದರು.
ನಗರದ ಅಶೋಕನಗರದ ಮಾನಸಧಾರ ಎಂಬ ಮದ್ಯವ್ಯೆಸನಿಗಳು ಮತ್ತು ಮಾನಸಿಕ ಕಾಯಿಲೆಗಳ ಪುನರ್ವಸತಿ ಕೇಂದ್ರದಲ್ಲಿ ಸೇಜಲ್ ನ್ಯೂ ಲೈಫ್ ಫೌಂಡೇಷನ್ನಿಂದ ಆಯೋಜಿಸಿದ್ದ ನೂತನ ವರ್ಷದ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯರು ಇಂದು ಹಲವಾರು ನಕಾರಾತ್ಮಕ ಚಿಂತನೆ, ನಡೆವಳಿಕೆ, ದುರಾಭ್ಯಾಸಗಳಿಂದ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಸಾಮರಸ್ಯ ಕುಂಠಿತಗೊಂಡು ಮನೋರೋಗಿಗಳಲ್ಲಿ ಮಾನಸಿಕ ಕಾಯಿಲೆ ಉಲ್ಬಣಗೊಳ್ಳುತ್ತಿದೆ ಎಂದು ರೋಗಿಗಳಿಗೆ ತಿಳಿಸಿದರು.
ಹಾಗಾಗಿ ಸ್ನೇಹಿತರು ಕುಟುಂಬ ವರ್ಗದವರು ಸೇರಿ ಸಂಭ್ರಮಾಚರಣೆ ಮಾಡುವುದರಿಂದ ಸಾಕಷ್ಟು ಮಾನಸಿಕ ಕಾಯಿಲೆಗಳು ಕಡಿಮೆಯಗುತ್ತವೆ. ಆದರೆ ಪ್ರಸ್ತುತ ಆಚರಣೆಗಳ ನೆಪದಲ್ಲಿ ಮದ್ಯಪಾನ ಮಾಡುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.