ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ಜೊತೆ ಹಬ್ಬ ಆಚರಿಸಿದ ಪ್ರಜ್ವಲ್

Last Updated 27 ಅಕ್ಟೋಬರ್ 2020, 4:02 IST
ಅಕ್ಷರ ಗಾತ್ರ

ಶಿರಾ: ಹುಲಿಕುಂಟೆ ಹೋಬಳಿಯ ಉಸ್ತುವಾರಿ ವಹಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಹಬ್ಬಕ್ಕೆ ಊರಿಗೆ ತೆರಳದೆ ದೊಡ್ಡಬಾಣಗೆರೆ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಆಯುಧಪೂಜೆ ಆಚರಿಸಿದರು.

ಶಿರಾ ವಿಧಾನಸಭೆ ಚುನಾವಣೆಯಲ್ಲಿ ಹುಲಿಕುಂಟೆ ಹೋಬಳಿಯ ಉಸ್ತುವಾರಿ ವಹಿಸಿದ್ದು ಹಬ್ಬವನ್ನು ತಮ್ಮ ಕುಟುಂಬದವರ ಜೊತೆ ಆಚರಿಸದೆ ಚುನಾವಣೆಗೆ ಮಹತ್ವ ನೀಡಿ ಕ್ಷೇತ್ರದಲ್ಲಿ ಉಳಿದುಕೊಂಡಿರುವುದು ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ.

ಹಬ್ಬದ ಆಚರಣೆ ನಂತರ ಕಾರ್ಯಕರ್ತರ ಜೊತೆ ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದರು. ಸೋಮವಾರ ಹುಲಿಕುಂಟೆ ಹೋಬಳಿಯಲ್ಲಿ ಪ್ರಚಾರ ಕೈಗೊಂಡರು.

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ‌ ಅವರು ಮಂಗಳವಾರದಿಂದ ಚುನಾವಣೆ ಪ್ರಚಾರ ಮುಂದುವರಿಸಲಿದ್ದು, ಪ್ರಜ್ವಲ್ ರೇವಣ್ಣ ಸಹ ಅವರಿಗೆ ಸಾಥ್ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT