ಶಿರಾ: ಹುಲಿಕುಂಟೆ ಹೋಬಳಿಯ ಉಸ್ತುವಾರಿ ವಹಿಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಹಬ್ಬಕ್ಕೆ ಊರಿಗೆ ತೆರಳದೆ ದೊಡ್ಡಬಾಣಗೆರೆ ಗ್ರಾಮದಲ್ಲಿ ಕಾರ್ಯಕರ್ತರ ಜೊತೆ ಆಯುಧಪೂಜೆ ಆಚರಿಸಿದರು.
ಶಿರಾ ವಿಧಾನಸಭೆ ಚುನಾವಣೆಯಲ್ಲಿ ಹುಲಿಕುಂಟೆ ಹೋಬಳಿಯ ಉಸ್ತುವಾರಿ ವಹಿಸಿದ್ದು ಹಬ್ಬವನ್ನು ತಮ್ಮ ಕುಟುಂಬದವರ ಜೊತೆ ಆಚರಿಸದೆ ಚುನಾವಣೆಗೆ ಮಹತ್ವ ನೀಡಿ ಕ್ಷೇತ್ರದಲ್ಲಿ ಉಳಿದುಕೊಂಡಿರುವುದು ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ.
ಹಬ್ಬದ ಆಚರಣೆ ನಂತರ ಕಾರ್ಯಕರ್ತರ ಜೊತೆ ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದರು. ಸೋಮವಾರ ಹುಲಿಕುಂಟೆ ಹೋಬಳಿಯಲ್ಲಿ ಪ್ರಚಾರ ಕೈಗೊಂಡರು.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರದಿಂದ ಚುನಾವಣೆ ಪ್ರಚಾರ ಮುಂದುವರಿಸಲಿದ್ದು, ಪ್ರಜ್ವಲ್ ರೇವಣ್ಣ ಸಹ ಅವರಿಗೆ ಸಾಥ್ ನೀಡಲಿದ್ದಾರೆ.