ಪಾವಗಡ: ತಾಲ್ಲೂಕು ಬಿ.ಕೆ.ಹಳ್ಳಿಯಲ್ಲಿ ಪಡಿತರ ತರಲು ಹೋಗಿದ್ದ ವ್ಯಕ್ತಿಯನ್ನು 6 ಜನರ ಗುಂಪು ಸೋಮವಾರ ಹತ್ಯೆ ಮಾಡಿದೆ. ತಾಲ್ಲೂಕಿನ ವಡ್ರೇವು ಗ್ರಾಮದ ಗಂಗಾಧರ್ ಹತ್ಯೆಯಾದವರು.
ಪಡಿತರ ವಿತರಣಾ ಕೇಂದ್ರ ಬಾಗಿಲು ತೆಗೆಯದ ಕಾರಣ ಮುಂಭಾಗ ಕುಳಿತಿದ್ದ ವ್ಯಕ್ತಿಯನ್ನು ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ. ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹತ್ಯೆ ಮಾಡಿದವರೇ ಮೃತದೇಹವನ್ನು ಕೊಂಡೊಯ್ದು ವಡ್ರೇವು ಗ್ರಾಮದಲ್ಲಿ ಎಸೆದು ಪರಾರಿಯಾಗಿದ್ದಾರೆ.
ತಿರುಮಣಿ ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್ ಸಬ್ ಇನ್ ಸ್ಪೆಕ್ಟರ್ ರಾಮಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.