ಚಿತ್ರವನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಹುಲಿವಾನ ಗಂಗಾಧರಯ್ಯ, ‘ಗ್ರಾಮೀಣ ಪ್ರದೇಶದ ಸೊಗಡನ್ನು, ಸಮಸ್ಯೆಗಳನ್ನು ಸತ್ಯಕ್ಕೆ ಹತ್ತಿರವಾಗಿ ಬಿಂಬಿಸಲಾಗಿದೆ. ನಿರ್ದೇಶಕ ಗಗನ್ ರೇವಣ್ಣ ನೈಪುಣ್ಯತೆ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಹೊಸ ಕಲಾವಿದರ ಹೊಸ ಪ್ರಯತ್ನಕ್ಕೆ ಬೆಂಬಲ ಸಿಗಬೇಕಿದೆ. ಚಿತ್ರದ ಹೆಸರು ನಮ್ಮೂರು ಕುಣಿಗಲ್ ಎಂದಾದರೂ ಚಿತ್ರದಲ್ಲಿ ದೇಶದ ರೈತರ ಮತ್ತು ಗ್ರಾಮೀಣ ಸಮಸ್ಯೆಗಳನ್ನು ಸಹಜತೆಗೆ ಹೊಂದಿಕೊಂಡಂತೆ ಚಿತ್ರಸಲಾಗಿದೆ’ ಎಂದು ತಿಳಿಸಿದರು.