‘ಕೆಂಪಾಪುರದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಮಾಡಿಸಲು ಅನುಮೋದನೆ ಪಡೆದ ವೆಂಕಟರೆಡ್ಡಿ ಮತ್ತು ಅವರ ಮಗ 2018ರಲ್ಲೇ ಮೃತಪಟ್ಟಿರುವ ಕೊಂಡರೆಡ್ಡಿಯವರ ಖಾತೆಗೆ ₹3,575 ಎನ್ಎಂಆರ್ ತೆಗೆಸಿದ್ದಾರೆ. ಚಿಕ್ಕಮಾಲೂರು ನಿವಾಸಿ ರಾಮಚಂದ್ರರೆಡ್ಡಿ ಮತ್ತು ಆತನ ಪತ್ನಿ ರತ್ನಮ್ಮ ಕೂಲಿ ಕೆಲಸಕ್ಕೆ ಹೋಗದಿದ್ದರೂ ಅವರ ಉದ್ಯೋಗ ಕಾರ್ಡ್ಗೆ ₹4,400 ಎನ್ಎಂಆರ್ ತೆಗೆಸಿದ್ದಾರೆ. ಜೊತೆಗೆ ಸಹಿ ನಕಲು ಮಾಡಿ ಈಗ ಹಣ ಡ್ರಾ ಮಾಡಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಕೃಷಿ ಇಲಾಖೆ ಮಧುಗಿರಿ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿ ಒಂಬುಡ್ಸ್ಮನ್ಗೆ ಪತ್ರ ಬರೆಯಲಾಗಿದೆ’ ಎಂದು ರಾಮಚಂದ್ರರೆಡ್ಡಿ ದೂರಿದ್ದಾರೆ.