‘ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಿದ್ದೇವೆ, ಬಸವಣ್ಣನವರಿಗೆ ಗೌರವ ಕೊಟ್ಟಿದ್ದೇವೆ’ ಎಂದು ಸ್ವಯಂ ಪ್ರಶಂಸೆ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರವು ‘ಬಸವಜಯಂತಿ’ ದಿನದಂದೇ (ಏ.18) ಸಿಇಟಿ ಪರೀಕ್ಷೆಯನ್ನು ಆಯೋಜಿಸಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ.
ಅಲ್ಪಸಂಖ್ಯಾತರ ಹಬ್ಬ ಹರಿದಿನಗಳಿಗಾಗಿ ಸಾರ್ವತ್ರಿಕ ರಜಾದಿನವನ್ನೇ ಹಿಂದು–ಮುಂದು ಮಾಡುವ ಸರ್ಕಾರ, ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ‘ಅಲ್ಪಸಂಖ್ಯಾತ’ ಸ್ಥಾನ ನೀಡುವ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಿದ ನಂತರವಾದರೂ ಪರೀಕ್ಷಾ ದಿನಾಂಕವನ್ನು ಬದಲಾಯಿಸಬಹುದಿತ್ತು.
18ರಂದೇ ಪರೀಕ್ಷೆ ಆಯೋಜಿಸುವ ಮೂಲಕ ‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡುವ ವಿಚಾರ ರಾಜಕೀಯ ಉದ್ದೇಶದ್ದು’ ಎಂಬುದನ್ನು ಸರ್ಕಾರ ಸಾಬೀತುಪಡಿಸಿದೆ.