ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಟ್ಟು ಕರಕಲಾದ ಮಾರುತಿ ಓಮ್ನಿ: ಒಬ್ಬ ಸಾವು

Last Updated 27 ಸೆಪ್ಟೆಂಬರ್ 2022, 4:02 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಾತೇನಹಳ್ಳಿ ಬಳಿ ಮಂಗವಾರ ಬೆಳಗಿನ ಜಾವ‌ ಓಮ್ನಿ ವ್ಯಾನ್ ಬೆಂಕಿಗೆ ಅಹುತಿಯಾಗಿದ್ದು, ಹೊಸಕೆರೆ ಗ್ರಾಮದ ರಂಗಯ್ಯ (45) ಮೃತಪಟ್ಟಿದ್ದಾರೆ.

ಕಾರ್ ನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರವರು ಅಪಾಯದಿಂದ ಪಾರಾಗಿದ್ದಾರೆ.
ಚೇಳೂರಿನಿಂದ‌ ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ವಾಹನ ಅಡ್ಡ ಬಂದಿದ್ದು,‌ ರಸ್ತೆಯ ಬದಿಗೆ ನಿಲ್ಲಿಸುವಾಗ ಕಾರು ಪಲ್ಟಿಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಕುರಿ ಮರಿಗಳನ್ನು ತರಲು ತುಮಕೂರಿನ ಬಟವಾಡಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT