ತುಮಕೂರು: ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಾತೇನಹಳ್ಳಿ ಬಳಿ ಮಂಗವಾರ ಬೆಳಗಿನ ಜಾವ ಓಮ್ನಿ ವ್ಯಾನ್ ಬೆಂಕಿಗೆ ಅಹುತಿಯಾಗಿದ್ದು, ಹೊಸಕೆರೆ ಗ್ರಾಮದ ರಂಗಯ್ಯ (45) ಮೃತಪಟ್ಟಿದ್ದಾರೆ.
ಕಾರ್ ನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರವರು ಅಪಾಯದಿಂದ ಪಾರಾಗಿದ್ದಾರೆ. ಚೇಳೂರಿನಿಂದ ತುಮಕೂರಿಗೆ ಹೋಗುವ ಮಾರ್ಗ ಮಧ್ಯೆ ವಾಹನ ಅಡ್ಡ ಬಂದಿದ್ದು, ರಸ್ತೆಯ ಬದಿಗೆ ನಿಲ್ಲಿಸುವಾಗ ಕಾರು ಪಲ್ಟಿಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಕುರಿ ಮರಿಗಳನ್ನು ತರಲು ತುಮಕೂರಿನ ಬಟವಾಡಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.