ಸಮೀಪದ ಚಾಮನಹಳ್ಳಿ ಗ್ರಾಮದ ವಿದ್ಯಾರ್ಥಿನಿ ದರ್ಶಿನಿ ಸೋಮವಾರ ಪರೀಕ್ಷೆಗೆ ಹೊರಟಾಗ ತಂದೆ ತ್ಯಾಗರಾಜು (53) ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ತೆರಳುವಾಗ ‘ನನಗೆ ಏನೂ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಪರೀಕ್ಷೆಗೆ ತಪ್ಪಿಸಿಕೊಳ್ಳಬೇಡ. ವರ್ಷಪೂರ್ತಿ ಓದಿದ ಶ್ರಮ ವ್ಯರ್ಥವಾಗುತ್ತದೆ’ ಎಂದು ತಿಳಿಸಿದರು. ತಂದೆಯ ಮಾತಿನಂತೆ ಪರೀಕ್ಷೆಗೆ ಹೊರಟರು. ಆದರೆ, ಪರೀಕ್ಷೆ ಬರೆದು ಬರುವಷ್ಟರಲ್ಲಿ ತಂದೆ ಶವವಾಗಿ ಮಲಗಿದ್ದರು.