ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪದವೀಧರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೌಶಲಾಭಿವೃದ್ಧಿ ನಿಗಮ ಸ್ಥಾಪಿಸಿ, ಯುವಜನರಿಗೆ ಸ್ವಯಂ ಉದ್ದಿಮೆ, ಉದ್ಯೋಗ ಪ್ರಾರಂಭಿಸಲು ಒತ್ತು ನೀಡಿದ್ದರು. ಸರ್ಕಾರಿ ನೌಕರರ 45 ಬೇಡಿಕೆಗಳಲ್ಲಿ 37 ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದರು.