ತುಮಕೂರು: ಪರಿಶಿಷ್ಟರ ವಸತಿ ನಿಲಯಗಳು, ವಸತಿಶಾಲೆಗಳಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಕ್ವಾರಂಟೈನ್ ನಂತರ ಸ್ಯಾನಿಟೈಸ್ ಸೇರಿದಂತೆ ಯಾವುದೇ ರೀತಿ ಸ್ವಚ್ಛತಾ ಕಾರ್ಯಗಳನ್ನು ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ ಆರೋಪಿಸಿದರು.