ಟ್ಯಾಂಕ್ ಬಳಿ ಪಶು ಆಸ್ಪತ್ರೆ, ಎಸ್ಬಿಐ ಬ್ಯಾಂಕ್, ಹಾಲು ಉತ್ಪಾದನಾ ಸಂಘ, ಅಂಗನವಾಡಿ ಕೇಂದ್ರ, ಶುದ್ಧೀಕರಣ ಘಟಕ ಇದೆ. ಈ ಪ್ರದೇಶದಲ್ಲಿ ಸಾಕಷ್ಟು ಜನತೆ ಓಡಾಡುತ್ತಿರುತ್ತಾರೆ. ಶಿಥಿಲಗೊಂಡಿರುವ ಟ್ಯಾಂಕ್ ನೆಲಕಚ್ಚಿ ಜೀವಗಳಿಗೆ ಹಾನಿಯಾಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ತಿಳಿಸಿದರು.