ಭೂಬಾಲನ್ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ದಿಟ್ಟ ಕ್ರಮಗಳ ಮೂಲಕ ನಗರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾಲಿಕೆಯ ಆದಾಯ ಸೋರಿಕೆ ತಡೆಗಟ್ಟಿದ್ದಾರೆ. ನಗರದಲ್ಲಿನ 21 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಾಲಿಕೆಯ ಸುಪರ್ದಿಗೆ ಪಡೆಯುವ ಮೂಲಕ ದಿಟ್ಟ ಕ್ರಮ ಕೈಗೊಂಡಿದ್ದರು. ಈ ಘಟಕಗಳಿಂದ ಸಂಗ್ರಹವಾಗುವ ಹಣವು ಪಾಲಿಕೆಗೆ ಸೇರದೆ ಕೆಲವೇ ಮಂದಿ ಪ್ರಭಾವಿಗಳ ಪಾಲಾಗುತ್ತಿತ್ತು.