ನಗರದಲ್ಲಿ ಬೀಡಾಡಿ ದನ, ಕುದುರೆ ಹಾಗೂ ಎಮ್ಮೆಗಳು ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಅಪಘಾತ ಹಾಗೂ ಇನ್ನಿತರೆ ಅವಘಡಗಳಿಗೆ ಕಾರಣವಾಗಿದೆ. ಸಾರ್ವಜನಿಕರಿಂದ ಈ ಬಗ್ಗೆ ದೂರುಗಳು ಬರುತ್ತಿವೆ. ವಾರಸುದಾರರು ತಮ್ಮ ಸಾಕು ಪ್ರಾಣಿಗಳನ್ನು ರಸ್ತೆಗಳಿಗೆ ಬಿಡಬಾರದು. ತಮ್ಮ ಮನೆ ಆವರಣದಲ್ಲಿ ಇಟ್ಟುಕೊಳ್ಳಬೇಕು. ತಪ್ಪಿದಲ್ಲಿ ರಾಸುಗಳನ್ನು ಗೋಶಾಲೆಗೆ ಸಾಗಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.