<p><strong>ಪಾವಗಡ:</strong> ಮೇಕೆಗಳಿಗಾಗಿ ವ್ಯಕ್ತಿಯನ್ನು (ಕುರಿಗಾಹಿ) ಕೊಲೆ ಮಾಡಿ, ಸಂತೆಯಲ್ಲಿ ಮೇಕೆ ಮಾರಾಟ ಮಾಡುವಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.</p><p>ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ದೇವಲಕೆರೆ ಗ್ರಾಮದ ನರಸಿಂಹಪ್ಪ (60) ಕೊಲೆಯಾದವರು. ಕರಿಯಮ್ಮನಪಾಳ್ಯದ ಮಣಿಕಂಠ (29) ಆರೋಪಿ.</p><p>ನರಸಿಂಹಪ್ಪ ದೇವಲಕೆರೆ ಹೊರವಲಯದ ತಿಪ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಮೇಕೆ ಮೇಯಿಸಲು ಹೋಗಿದ್ದರು. ಈ ವೇಳೆ ಮಣಿಕಂಠ ಕುಡುಗೋಲಿನಿಂದ ನರಸಿಂಹಪ್ಪನ ಕುತ್ತಿಗೆ, ಎಡಗೈ ಬೆರಳು ಕತ್ತರಿಸಿ ಹತ್ಯೆ ಮಾಡಿ, ಸುಮಾರು 30 ಮೇಕೆಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಹೊಡೆದುಕೊಂಡು ಹೋಗಿದ್ದರು.</p><p>ಸಂಜೆಯಾದರೂ ನರಸಿಂಹಪ್ಪ ಮನೆಗೆ ಬಾರದಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಗ್ರಾಮಸ್ಥರನ್ನು ವಿಚಾರಿಸಿದ್ದರು. ರಂಗಸಮುದ್ರ, ವದನಕಲ್ಲು ಮಾರ್ಗವಾಗಿ ಮೇಕೆಗಳನ್ನು ಹಿರಿಯೂರಿಗೆ ಹೊಡೆದುಕೊಂಡು ಹೋಗಿರುವ ವಿಚಾರ ಗೊತ್ತಾಗಿತ್ತು.</p><p>ಹಿರಿಯೂರಿನ ಸಂತೆಯಲ್ಲಿ ಮೇಕೆಗಳನ್ನು ಮಾರಾಟ ಮಾಡಲು ಮಣಿಕಂಠ ಪ್ರಯತ್ನಿಸುತ್ತಿದ್ದಾಗ ಮೃತ ನರಸಿಂಹಪ್ಪ ಅವರ ಮಗ ಮಂಜುನಾಥ್ ಮೇಕೆಗಳನ್ನು ಗುರುತು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಹತ್ಯೆಯ ವಿಚಾರ ತಿಳಿದಿದೆ.</p><p>ಅರಸೀಕೆರೆ ಪೊಲೀಸರು ಆರೋಪಿಯನ್ನು ಅರಣ್ಯ ಪ್ರದೇಶದ ಘಟನಾ ಸ್ಥಳಕ್ಕೆ ಕರೆದೊಯ್ದು ಮೃತ ದೇಹ ಪತ್ತೆ ಮಾಡಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಮೇಕೆಗಳಿಗಾಗಿ ವ್ಯಕ್ತಿಯನ್ನು (ಕುರಿಗಾಹಿ) ಕೊಲೆ ಮಾಡಿ, ಸಂತೆಯಲ್ಲಿ ಮೇಕೆ ಮಾರಾಟ ಮಾಡುವಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.</p><p>ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ದೇವಲಕೆರೆ ಗ್ರಾಮದ ನರಸಿಂಹಪ್ಪ (60) ಕೊಲೆಯಾದವರು. ಕರಿಯಮ್ಮನಪಾಳ್ಯದ ಮಣಿಕಂಠ (29) ಆರೋಪಿ.</p><p>ನರಸಿಂಹಪ್ಪ ದೇವಲಕೆರೆ ಹೊರವಲಯದ ತಿಪ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಮೇಕೆ ಮೇಯಿಸಲು ಹೋಗಿದ್ದರು. ಈ ವೇಳೆ ಮಣಿಕಂಠ ಕುಡುಗೋಲಿನಿಂದ ನರಸಿಂಹಪ್ಪನ ಕುತ್ತಿಗೆ, ಎಡಗೈ ಬೆರಳು ಕತ್ತರಿಸಿ ಹತ್ಯೆ ಮಾಡಿ, ಸುಮಾರು 30 ಮೇಕೆಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಹೊಡೆದುಕೊಂಡು ಹೋಗಿದ್ದರು.</p><p>ಸಂಜೆಯಾದರೂ ನರಸಿಂಹಪ್ಪ ಮನೆಗೆ ಬಾರದಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಗ್ರಾಮಸ್ಥರನ್ನು ವಿಚಾರಿಸಿದ್ದರು. ರಂಗಸಮುದ್ರ, ವದನಕಲ್ಲು ಮಾರ್ಗವಾಗಿ ಮೇಕೆಗಳನ್ನು ಹಿರಿಯೂರಿಗೆ ಹೊಡೆದುಕೊಂಡು ಹೋಗಿರುವ ವಿಚಾರ ಗೊತ್ತಾಗಿತ್ತು.</p><p>ಹಿರಿಯೂರಿನ ಸಂತೆಯಲ್ಲಿ ಮೇಕೆಗಳನ್ನು ಮಾರಾಟ ಮಾಡಲು ಮಣಿಕಂಠ ಪ್ರಯತ್ನಿಸುತ್ತಿದ್ದಾಗ ಮೃತ ನರಸಿಂಹಪ್ಪ ಅವರ ಮಗ ಮಂಜುನಾಥ್ ಮೇಕೆಗಳನ್ನು ಗುರುತು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಹತ್ಯೆಯ ವಿಚಾರ ತಿಳಿದಿದೆ.</p><p>ಅರಸೀಕೆರೆ ಪೊಲೀಸರು ಆರೋಪಿಯನ್ನು ಅರಣ್ಯ ಪ್ರದೇಶದ ಘಟನಾ ಸ್ಥಳಕ್ಕೆ ಕರೆದೊಯ್ದು ಮೃತ ದೇಹ ಪತ್ತೆ ಮಾಡಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>