<p><strong>ಪಾವಗಡ:</strong> ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಾಗಿ ತುಮಕೂರು ರಸ್ತೆಯ ಖಾಸಗಿ ಎಲ್ಪಿಜಿ ಸಿಲಿಂಡರ್ ವಿತರಣಾ ಏಜೆನ್ಸಿ ಮುಂಭಾಗದಲ್ಲಿ ಗುರುವಾರ ಜಮಾವಣೆಗೊಂಡು ಜನರು ಸಿಲಿಂಡರ್ ಪಡೆಯಲು ಪರದಾಡಿದರು.</p>.<p>ಮುಂದಿನ ದಿನಗಳಲ್ಲಿ ಸಿಲಿಂಡರ್ ಸಿಗುತ್ತದೆಯೊ, ಇಲ್ಲವೊ ಎಂಬ ಆತಂಕದಲ್ಲಿ ಜನರು ಗುರುವಾರ ಪಟ್ಟಣದ ತುಮಕೂರು ರಸ್ತೆಯ ವಿತರಣಾ ಕೇಂದ್ರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.</p>.<p>ಹೋಟೆಲ್ ಸೇರಿದಂತೆ ಗೃಹಬಳಕೆಗಾಗಿ, ಕೆಲವರು ದರ ಹೆಚ್ಚುವ ಭೀತಿ, ಮುಂದೆ ಸಿಲಿಂಡರ್ ಸಿಗದೆ ಸಮಸ್ಯೆಯಾಗಬಹುದು ಎಂದು ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದೂ ಬೇಡಿಕೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.</p>.<p>ಸರ್ವರ್ ಸಮಸ್ಯೆ ನಡುವೆಯೂ ಇಲ್ಲಿನ ಸಿಬ್ಬಂದಿ ಚೀಟಿ ಬರೆದುಕೊಟ್ಟು ಸಂಜೆ 6ರವರೆಗೆ ಸಿಲಿಂಡರ್ ವಿತರಿಸಿದರು. ಈವರೆಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದಾಸ್ತಾನು ತರಿಸಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಇಲ್ಲಿ ಬರಬೇಡಿ ಆಂಧ್ರದ ಅನಂತಪುರ, ಕಡಪ ಸೇರಿದಂತೆ ಬೇರೆ ಕಡೆಯಿಂದ ದಾಸ್ತಾನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಂದೇನಾಗುವುದೋ ಕಾದು ನೋಡಬೇಕು ಎಂದು ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಸಿಲಿಂಡರ್ ಪಡೆಯಲು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ನಾಲ್ಕು ದಿನಗಳ ಹಿಂದೆ ಗ್ಯಾಸ್ ಬುಕ್ ಮಾಡಿದ್ದು ಒಟಿಪಿ ಸಹ ಬಂದಿದೆ. ಆದರೆ ಸರ್ವರ್ ಸಮಸ್ಯೆ ಇದೆ ಎಂದು ಸಿಲಿಂಡರ್ ನೀಡುತ್ತಿಲ್ಲ ಎಂದು ಜನರು ಸಮಸ್ಯೆ ವಿವರಿಸಿದರು.</p>.<p>ವಿತರಣಾ ಕೇಂದ್ರದ ಕಾರ್ತಿಕ್ ಪ್ರತಿಕ್ರಿಯಿಸಿ, ಸಿಲಿಂಡರ್ ದಾಸ್ತಾನು ಇದೆ, ಆದರೆ ಗ್ರಾಹಕರಿಗೆ ವಿತರಣೆ ಮಾಡಲು ಸರ್ವರ್ ಸಮಸ್ಯೆಯಾಗಿದೆ. ತಾಂತ್ರಿಕ ಸಮಸ್ಯೆ ಸರಿಯಾದ ಕೂಡಲೇ ಜೇಷ್ಠತೆ ಆಧಾರದಲ್ಲಿ ವಿತರಿಸಲಾಗುವುದು. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಾಗಿ ತುಮಕೂರು ರಸ್ತೆಯ ಖಾಸಗಿ ಎಲ್ಪಿಜಿ ಸಿಲಿಂಡರ್ ವಿತರಣಾ ಏಜೆನ್ಸಿ ಮುಂಭಾಗದಲ್ಲಿ ಗುರುವಾರ ಜಮಾವಣೆಗೊಂಡು ಜನರು ಸಿಲಿಂಡರ್ ಪಡೆಯಲು ಪರದಾಡಿದರು.</p>.<p>ಮುಂದಿನ ದಿನಗಳಲ್ಲಿ ಸಿಲಿಂಡರ್ ಸಿಗುತ್ತದೆಯೊ, ಇಲ್ಲವೊ ಎಂಬ ಆತಂಕದಲ್ಲಿ ಜನರು ಗುರುವಾರ ಪಟ್ಟಣದ ತುಮಕೂರು ರಸ್ತೆಯ ವಿತರಣಾ ಕೇಂದ್ರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.</p>.<p>ಹೋಟೆಲ್ ಸೇರಿದಂತೆ ಗೃಹಬಳಕೆಗಾಗಿ, ಕೆಲವರು ದರ ಹೆಚ್ಚುವ ಭೀತಿ, ಮುಂದೆ ಸಿಲಿಂಡರ್ ಸಿಗದೆ ಸಮಸ್ಯೆಯಾಗಬಹುದು ಎಂದು ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಇದೂ ಬೇಡಿಕೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.</p>.<p>ಸರ್ವರ್ ಸಮಸ್ಯೆ ನಡುವೆಯೂ ಇಲ್ಲಿನ ಸಿಬ್ಬಂದಿ ಚೀಟಿ ಬರೆದುಕೊಟ್ಟು ಸಂಜೆ 6ರವರೆಗೆ ಸಿಲಿಂಡರ್ ವಿತರಿಸಿದರು. ಈವರೆಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದಾಸ್ತಾನು ತರಿಸಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಇಲ್ಲಿ ಬರಬೇಡಿ ಆಂಧ್ರದ ಅನಂತಪುರ, ಕಡಪ ಸೇರಿದಂತೆ ಬೇರೆ ಕಡೆಯಿಂದ ದಾಸ್ತಾನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಂದೇನಾಗುವುದೋ ಕಾದು ನೋಡಬೇಕು ಎಂದು ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಸಿಲಿಂಡರ್ ಪಡೆಯಲು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ನಾಲ್ಕು ದಿನಗಳ ಹಿಂದೆ ಗ್ಯಾಸ್ ಬುಕ್ ಮಾಡಿದ್ದು ಒಟಿಪಿ ಸಹ ಬಂದಿದೆ. ಆದರೆ ಸರ್ವರ್ ಸಮಸ್ಯೆ ಇದೆ ಎಂದು ಸಿಲಿಂಡರ್ ನೀಡುತ್ತಿಲ್ಲ ಎಂದು ಜನರು ಸಮಸ್ಯೆ ವಿವರಿಸಿದರು.</p>.<p>ವಿತರಣಾ ಕೇಂದ್ರದ ಕಾರ್ತಿಕ್ ಪ್ರತಿಕ್ರಿಯಿಸಿ, ಸಿಲಿಂಡರ್ ದಾಸ್ತಾನು ಇದೆ, ಆದರೆ ಗ್ರಾಹಕರಿಗೆ ವಿತರಣೆ ಮಾಡಲು ಸರ್ವರ್ ಸಮಸ್ಯೆಯಾಗಿದೆ. ತಾಂತ್ರಿಕ ಸಮಸ್ಯೆ ಸರಿಯಾದ ಕೂಡಲೇ ಜೇಷ್ಠತೆ ಆಧಾರದಲ್ಲಿ ವಿತರಿಸಲಾಗುವುದು. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>