ತುಮಕೂರು: ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ವೈ.ಎಂ.ಗಿರೀಶ್ ಅವರು ಮ್ಯಾನೇಜ್ಮೆಂಟ್ಗೆ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ಮಹಾ ಪ್ರಬಂಧಕ್ಕೆ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿದೆ.
ಹುಬ್ಬಳ್ಳಿಯ ಮನಿಸೆಂಟರ್ ಸಂಸ್ಥೆಯ ಡಾ.ಅನಿಲಕುಮಾರ ಜಿ.ಗರಗ ಅವರು ಮಾರ್ಗದರ್ಶನ ಮಾಡಿದ್ದರು.