ಶಂಕರನಾಯ್ಕ ಎಂಬುವವರ ಎಟಿಎಂ ಕಾರ್ಡ್ ಪಡೆದು ವ್ಯಕ್ತಿಯೊಬ್ಬ ಠಾಣೆ ಮುಂಭಾಗದ ಕರ್ನಾಟಕ ಬ್ಯಾಂಕ್ ಎಟಿಎಂನಿಂದ ₹ 1 ಲಕ್ಷ ಡ್ರಾ ಮಾಡಿಕೊಂಡಿದ್ದ. ಮತ್ತೊಬ್ಬ ವ್ಯಕ್ತಿ ರಾಜವಂತಿ ಅಡವಪ್ಪ ಎಂಬುವವರ ಎಟಿಎಂ ಕಾರ್ಡ್ ಪಡೆದು ₹ 25 ಸಾವಿರ ಡ್ರಾ ಮಾಡಿದ್ದ. ಈ ಇಬ್ಬರು ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪಟ್ಟಣದ ಶನೈಶ್ಚರ ದೇಗುಲದಲ್ಲಿ ಭಕ್ತರೊಬ್ಬರ ₹ 80 ಸಾವಿರ ಕಳ್ಳತನವಾಗಿತ್ತು. ಈ ಪ್ರಕರಣವನ್ನೂ ದಾಖಲಿಸಿರಲಿಲ್ಲ.