ಐಡಿಹಳ್ಳಿ ಹೋಬಳಿಯ ಗಡಿಭಾಗ ವಿಠಲಾಪುರದಲ್ಲಿ ಒಂದು ಚಿಕ್ಕ ಕೆರೆಯಿದೆ. ಈಚೆಗೆ ಒಬ್ಬರು ಗ್ರಾಮದ ಸಮೀಪದಲ್ಲೇ ಕೋಳಿ ಫಾರಂ ಆರಂಭಿಸಿದ್ದು, ಸತ್ತಿರುವ ಕೋಳಿಗಳನ್ನು ಕೆರೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಾಯಿ, ಪಕ್ಷಿ, ಸತ್ತಿರುವ ಕೋಳಿಗಳನ್ನು ತಿನ್ನುವುದರಿಂದ, ದನ ಕರುಗಳು ಕೆರೆಯ ಗುಂಡಿಗಳಲ್ಲಿ ನಿಂತಿರುವ ನೀರನ್ನು ಕುಡಿಯುವುದರಿಂದ ತ್ಯಾಜ್ಯದ ವಾಸನೆಯಿಂದ ಗ್ರಾಮಸ್ಥರು ಮತ್ತು ಪ್ರಾಣಿ-ಪಕ್ಷಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.