ತುಮಕೂರು: ಬೆಸ್ಕಾಂ ನಗರ ಉಪ ವಿಭಾಗ-3ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಅ. 26 ಮತ್ತು 27ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಪ್ರದೇಶಗಳು: ಊರ್ಡಿಗೆರೆ, ದೇವರಾಯನದುರ್ಗ, ದುರ್ಗದಹಳ್ಳಿ, ಅರೇಗುಜ್ಜನಹಳ್ಳಿ, ಮೈದಾಳ, ಹೊದೆಕಲ್ಲು, ಸೀತಕಲ್ಲು, ಸಾತಘಟ್ಟ, ಕುರುವೇಲು, ಬ್ಯಾತ, ಕೊಡಿಗೇಹಳ್ಳಿ, ಢಣನಾಯಕನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
28ಕ್ಕೆ ಉದ್ಯೋಗಕ್ಕೆ ಸಂದರ್ಶನ
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಟಿಡಿ ಪವರ್ ಸಿಸ್ಟಂ ಲಿಮಿಟೆಡ್ ಸಂಸ್ಥೆ ಸಹಭಾಗಿತ್ವದಲ್ಲಿ ಐಟಿಐ ಫಿಟ್ಟರ್, ಎಲೆಕ್ಟ್ರೀಷಿಯನ್, ವೆಲ್ಡರ್, ಡಿಪ್ಲೊಮಾ ಇನ್ ಎ ಅಂಡ್ ಇ ಪಾಸಾದ 18ರಿಂದ 35 ವರ್ಷದೊಳಗಿನ ಪುರುಷ, ಮಹಿಳಾ ಅಭ್ಯರ್ಥಿಗಳಿಗೆ ಅ. 28ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ವ್ಯಕ್ತಿಗತ ವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂರವಾಣಿ 0816-2278488 ಸಂಪರ್ಕಿಸಬಹುದು.