ಈ ಹಿಂದೆ ಹಲವು ಬಾರಿ ಇಂತಹ ಸಮಸ್ಯೆ ತಲೆದೋರಿದೆ. ಪರಿಶಿಷ್ಟರಿಗೆ ಪ್ರತ್ಯೇಕ ಸ್ಮಶಾನ ಇಲ್ಲದ ಕಾರಣ ಖಾಸಗಿ ಜಮೀನಿನಲ್ಲಿ ಹಲವು ದಶಕಗಳಿಂದ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿದ್ದೇವೆ. ಇಲ್ಲಿ ನಮ್ಮವರ ಅನೇಕ ಸಮಾದಿಗಳಿದ್ದು, ಹಬ್ಬ ಇನ್ನಿತರೆ ದಿನಗಳಲ್ಲಿ ಪೂಜೆ ನಡೆಸುತ್ತೇವೆ. ಆದರೆ ಇತ್ತೀಚೆಗೆ ಜಮೀನು ಮಾಲೀಕರು ನಮಗೆ ಅವಕಾಶ ನೀಡುತ್ತಿಲ್ಲ. ಜಮೀನಿಗೆ ಮುಳ್ಳುತಂತಿ ಹಾಕಿ ಪ್ರವೇಶ ನಿಷೇಧಿಸಿದ್ದಾರೆ ಎಂದು ಸಮದಾಯದ ಮುಖಂಡರು ಹೇಳಿದರು.