ಯುವಜನರು ಈ ರೀತಿ ಗ್ರಾಮಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೆ ತಾವು ಅನುಭವಿಸಿದ ಸ್ವಚ್ಛಂದ ದಟ್ಟ ಪರಿಸರ, ಭೂ ಮೇಲ್ಮೈ ಮೇಲೆ ಸಿಗುತ್ತಿದ್ದ ಶುದ್ದ ನೀರು, ಜನರ ಶ್ರಮಜೀವನ, ಸಾಕಾಗುವಷ್ಟು ಬೆಳೆ ಕೊಡುತ್ತಿದ್ದ ಭೂತಾಯಿ ಶಕ್ತಿ ಮೊದಲಾದವನ್ನು ನೆನೆದರು ಮತ್ತು ಅವೆಲ್ಲವೂ ನಾಶವಾಗಿರುವುದಕ್ಕೆ ಮರುಕ ವ್ಯಕ್ತಪಡಿಸಿದರು.