ರಂಗಶಿಕ್ಷಕ ಗುರುರಾಜ ಮಾತನಾಡಿ, ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಇಂದಿನ ದಿನಮಾನದಲ್ಲಿ ತುಡಿತವಿಲ್ಲದೆ ಬದುಕುವವರಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರಂಗಭೂಮಿ ನೀಡುತ್ತದೆ. ಪ್ರತಿ ಗಳಿಗೆ ಜೀವಂತಿಕೆಯಿಂದ ಬದುಕುವ ಕಾರ್ಯವಾಗಬೇಕು ಎಂದು ತಿಳಿಸಿದರು. ಶಿಕ್ಷಕ ಮರಿಯಪ್ಪ ಜರಕುಂಟಿ ಮಾತನಾಡಿದರು. ಜಗದೀಶ್, ಶ್ರೀದೇವಿ ಗುಳಬಾಳ, ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ ಇದ್ದರು. ಗುರುರಾಜ ಅವರು ನಿರ್ದೇಶಿಸಿದ ‘ಆಹಾರ’ ನಾಟಕವನ್ನು ಎಂಟನೇ ತರಗತಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.