ಬೆಳ್ಳಾವಿ, ಸೋರೆಕುಂಟೆ, ಚನ್ನೇನಹಳ್ಳಿ, ದೊಡ್ಡೇರಿ, ಜಿ.ಗೊಲ್ಲಹಳ್ಳಿ, ದೊಡ್ಡವೀರನಹಳ್ಳಿ, ನೆಲಹಾಳ್, ಬಳ್ಳಾಪುರ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ತುಂಬಿಸುವ ಯೋಜನೆಯಿದ್ದರೂ ಇದುವರೆಗೂ ನೀರು ಹರಿದಿಲ್ಲ. ಈ ಹಿನ್ನೆಲೆಯಲ್ಲಿ ಈ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.