ತುಮಕೂರು: ನಗರದ ಅಂತರಸನಹಳ್ಳಿಯ ಕಾಳೇಶ್ವರಿ ರೀಫೈನರಿ ಸಂಸ್ಥೆಯಲ್ಲಿ 10–12 ವರ್ಷಗಳಿಂದ ದುಡಿದ ಕಾರ್ಮಿಕರನ್ನು ಏಕಾಏಕಿ ಹೊರಹಾಕಿರುವುದನ್ನು ಪ್ರತಿಭಟಿಸಿ ಕಾರ್ಖಾನೆ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 15ನೇ ದಿನ ಪೂರ್ಣಗೊಳಿಸಿದೆ. ಆದರೂ ಕಾರ್ಖಾನೆಯ ಮಾಲೀಕರು ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.