ಹೋಬಳಿಯ ಕಡಗತ್ತೂರು-ಹನುಮೇನಹಳ್ಳಿ ರಸ್ತೆ ಮೂಲಕ ವಿವಿಧ ಹಳ್ಳಿಗಳಿಂದ ನಿತ್ಯ 100ಕ್ಕೂ ಹೆಚ್ಚು ಆಟೊ ಮತ್ತು 300ಕ್ಕಿಂತ ಅಧಿಕ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆ ಹಾಳಾಗಿರುವುದರಿಂದ ಮಳೆ ಬಂದಾಗ ಕೆಸರು ಗದ್ದೆಯಾಗುತ್ತದೆ. ಇದರಿಂದ ಈ ರಸ್ತೆ ಮೂಲಕ ಸಂಚರಿಸುವ ಆಟೊ, ದ್ವಿಚಕ್ರ ವಾಹನಗಳು ಬಿದ್ದು ಅನೇಕರು ಗಾಯಗೊಂಡಿದ್ದಾರೆ. ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಮನೆಗಳಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುತ್ತೇವೆ. ಆದರೆ ಸಂಜೆ ಮನೆಗೆ ವಾಪಸ್ಸಾಗುವುದು ಗ್ಯಾರಂಟಿ ಇರುವುದಿಲ್ಲ. ಶಾಸಕರು, ಸಂಸದರು ಮತ್ತು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಅಭಿವೃದ್ಧಿಪಡಿಸಬೇಕು ಎಂದು ಕಡಗತ್ತೂರು ಗ್ರಾಮದ ಶ್ರೀನಾಥ್, ಅನಿಲ್, ಕಾಂತಮ್ಮ, ನಾಗಮಣಿ, ಗಂಗಾದೇವಿ, ಈಶ್ವರಮ್ಮ, ಹರೀಶ್, ನಾಗಗರಾಜು, ಮಧು, ಗಿರೀಶ್, ಪ್ರಸಾದ್, ಕಿರಣ್ ಕುಮಾರ್, ಮಂಜುನಾಥ್, ಗೋವಿಂದರಾಜು ಒತ್ತಾಯಿಸಿದ್ದಾರೆ.