ಐದು ವರ್ಷಗಳ ಸಸಿಗಳು ನಾಶವಾಗಿದ್ದು ಕಂಡು ಅವರಿಗೆ ಬೇಸರ ಮೂಡಿತು. 2012ರಿಂದಲೂ ಜಮೀನು ವಿವಾದದ ಬಗ್ಗೆ ನ್ಯಾಯಾಲಯಗಳಿಗೆ ಅಲೆದು ಸಾಕಾಗಿದ್ದರೂ ಅಡಿಕೆ, ತೆಂಗು, ಬಾಳೆ ಬೆಳೆಸಿದ್ದರು. ಫಲ ಕಾಣುವ ಮೊದಲೇ ಮಣ್ಣುಪಾಲಾಗಿದ್ದವು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು. ಪಿಎಸ್ಐ ವಿಕಾಸ್ ಗೌಡ ಅವರ ಮಾತುಗಳು ಆತ್ಮಸ್ಥೈರ್ಯ ತುಂಬಿದವು. ಈಗ ಮತ್ತೆ ಅಡಕೆ ಸಸಿಗಳನ್ನು ಬೆಳೆಯುವ ತೀರ್ಮಾನಕ್ಕೆ ಬಂದಿದ್ದಾರೆ.