ಸಂಪ್ರದಾಯದಂತೆ ಮೊದಲ ದಿನ ಮೂಲ ಬೃಂದಾವನಕ್ಕೆ ಗಂಧದ ಲೇಪನ ಮಾಡಿ ಎರಡನೆಯ ದಿನ ಅಯೋಧ್ಯೆಯ ಶ್ರೀರಾಮನ ದೇವಾಲಯದ ಮೂಲನಕ್ಷೆಯನ್ನು ಇಟ್ಟು ಪಂಚಾಮೃತ ಅಭಿಷೇಕ ಮಾಡಲಾಯಿತು.ಮೂಲ ರಾಮನನ್ನು ಪೂಜಿಸಿ ಬೃಂದಾವನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಸರಳವಾಗಿ ತೊಟ್ಟಿಲು ಸೇವೆ ನೆರವೇರಿಸಲಾಯಿತು.
ಗುರುವಾರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಸರದಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ರಾಯರ ದರ್ಶನ ಪಡೆದರು. ಬದರೀನಾಥ್ ಜೋಷಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಕಾರ್ಯದರ್ಶಿ ಪುಟ್ಟಣ್ಣ, ನಿರ್ದೇಶಕರು ಇದ್ದರು.