ರೈತ ಸಂಪರ್ಕ ಕೇಂದ್ರಕ್ಕೆ ರೈತರು ಕರೆಮಾಡಿ, ಎಂಆರ್ ತಳಿಯ ರಾಗಿ ಸಿಗುವುದೆ ಎಂದು ಪ್ರಶ್ನಿಸಿದರೆ ‘ಇದೆ, ಬನ್ನಿ’ ಎಂಬ ಉತ್ತರ ಬರುತ್ತದೆ. ಕೇಂದ್ರಕ್ಕೆ ಹೋದರೆ ಇನ್ನೂ ದಾಸ್ತಾನು ಬಂದಿಲ್ಲ. ಸದ್ಯಕ್ಕೆ ಬೇಕಾದರೆ ಎಂಎಲ್ ತಳಿ ಇದೆ. ಅದನ್ನೇ ತೆಗೆದುಕೊಂಡುಹೋಗಿ ಎಂದು ಹೇಳುತ್ತಿದ್ದಾರೆ. ಇನ್ನೂ ಸ್ವಲ್ಪ ಜೋರಾಗಿ ಕೇಳಿದರೆ ಕರ್ನಾಟಕ ಬೀಜ ನಿಗಮದ ಅಧಿಕಾರಿಗಳನ್ನು ಕೇಳಿ. ಅವರು ಕೊಟ್ಟಿದ್ದನ್ನು ನಾವು ಮಾರಾಟ ಮಾಡುತ್ತಿದ್ದೇವೆ ಎಂಬ ಉತ್ತರ ಬರುತ್ತದೆ.