ಸೊರವನಹಳ್ಳಿ ಗೊಲ್ಲರಹಟ್ಟಿ ಮತ್ತು ಕೋಡಿಹಳ್ಳಿ ಭಾಗದಲ್ಲಿ ರೈತ ಸೀಗೇಗೌಡರ 37 ತೆಂಗಿನ ಮರಗಳು, ನಿಂಗಯ್ಯ ಅವರ 20, ಪುನೀತ್ 42, ನರಸಿಂಹ 3, ಸಣ್ಣಯ್ಯ ಅವರ 10 ಸೇರಿದಂತೆ 400ಕ್ಕೂ ಹೆಚ್ಚಿನ ತೆಂಗು, ಅಡಿಕೆ, ಬಾಳೆಯ ಗಿಡಗಳು ಗಾಳಿ ರಭಸಕ್ಕೆ ಬುಡಮೇಲಾಗಿವೆ. ಇಷ್ಟೇ ಅಲ್ಲದೆ ಸೊರವನಹಳ್ಳಿ ಗೊಲ್ಲರಹಟ್ಟಿಯ ವಯೋವೃದ್ಧೆ ತಿಮ್ಮಮ್ಮ ಅವರ ಮನೆಯ ಶೀಟ್ ಹಾರಿ ಹೋಗಿದೆ. ಮನೆಯಲ್ಲಿ ಮಳೆಯ ನೀರು ನಿಂತಿದೆ.