ಹುಲಿಯೂರುದುರ್ಗ: ಹೋಬಳಿಯ ರಾಜೇಂದ್ರ ಪುರ ಗ್ರಾಮದಲ್ಲಿ ಬುಧವಾರ ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ಸ್ತಂಭಗಳು ನೆಲಕ್ಕುರುಳಿದವು, ತೆಂಗಿನ ಮರಗಳು ಬುಡ ಮೇಲಾದವು. ಮನೆ ಚಾವಣಿಯವ ಹೊದಿಕೆಗಳು ಹಾರಿ ಹೋದವು.
ತೀವ್ರವಾಗಿ ಬೀಸಿದ ಗಾಳಿ ಜೋರಾಗಿ ಸುರಿಯಬೇಕಿದ್ದ ಮಳೆಯ ಪ್ರಮಾಣವನ್ನು ಕಡಿಮೆ ಮಾಡಿತು. ಇದರಿಂದ ಜನರು ಅತೃಪ್ತಿ ವ್ಯಕ್ತಪಡಿಸಿದರು.
ಹುಲಿಯೂರುದುರ್ಗ ಸೇರಿದಂತೆ ಗೊಲ್ಲರಹಟ್ಟಿ, ಸೀಗೇಪಾಳ್ಯ, ಮಾದಪ್ಪನಹಳ್ಳಿ, ಡಿ.ಹೊಸಹಳ್ಳಿ ಸಿಂಗೋನಹಳ್ಳಿ, ವಾಜರಪಾಳ್ಯ, ಬೀಚನಹಳ್ಳಿ, ಹಳೇವೂರು, ಮೆಣಸಕೆರೆದೊಡ್ಡಿ, ನಂಜೇಗೌಡನದೊಡ್ಡಿ, ಕುಂಟಯ್ಯನಪಾಳ್ಯ ಗ್ರಾಮಗಳಲ್ಲಿ ಕೂಡ ಗಾಳಿ ಹಾಗೂ ಮಳೆಯ ಆರ್ಭಟ ಜೋರಾಗಿತ್ತು.