ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ವೇಳೆ ಸುರಿದ ಮಳೆ; ತಂದಿತು ಸಂತಸ

Last Updated 8 ಅಕ್ಟೋಬರ್ 2019, 15:30 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ (ಮಧುಗಿರಿ ತಾ.): ದಸರಾ ಹಬ್ಬದ ಸಮಯದಲ್ಲಿ ಸೋಮವಾರ ಮುಂಜಾನೆ ಸುರಿದ ಬಾರಿ ಮಳೆಯಿಂದ ಜನರು ಹಬ್ಬ ಮಾಡಿದಷ್ಟೇ ಬಾರಿ ಖುಷಿಪಟ್ಟರು.

ಕೊಡಿಗೇನಹಳ್ಳಿ ಭಾಗದಲ್ಲಿ ವಾರದಿಂದ ಆಗಾಗ ಸಾಧಾರಣವಾಗಿ ಮಳೆ ಬೀಳುತ್ತಿತ್ತು. ಆದರೆ, ದಸರ ಹಬ್ಬದ ಮುಂಜಾನೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳ ತುಂಬಿ ಕೆರೆ-ಕುಂಟೆಗಳಿಗೆ ನೀರು ಹರಿದ ಪರಿಣಾಮ ಹಬ್ಬದ ಸಿದ್ಧತೆಯಲ್ಲಿದ್ದ ಜನ ಸಂತುಷ್ಟರಾದರು. ಹಿಂದಿನ ವರ್ಷ ಭೀಕರ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಪರದಾಡಿದ್ದರು. ಈ ವರ್ಷದ ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದರಿಂದ ಮುಂದೆ ಎಂತಹ ದಿನಗಳನ್ನು ಕಾಣಬೇಕೋ ಎಂಬ ರೈತರನ್ನು ಚಿಂತೆ ಕಾಡುತ್ತಿತ್ತು.

ಆದರೆ, ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಕಾಲುವೆಗಳ ಮುಖಾಂತರ ಕೆರೆ-ಕುಂಟೆಗಳತ್ತ ನೀರು ಹರಿಯಿತು. ಜನರು ಕುಣಿದು ಕುಪ್ಪಳಿಸಿ ಸೆಲ್ಫಿಗಳನ್ನು ತೆಗೆದುಕೊಂಡು ಖುಷಿಪಟ್ಟರು.

ಇನ್ನು ಮಳೆಯಿಂದ ಈ ವರ್ಷ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ತೊಂದರೆಯಾಗುವುದಿಲ್ಲ. ಕೆಲ ಕುಂಟೆ ಮತ್ತು ಕೆರೆಗಳಿಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗಿ ಎಲ್ಲ ಕೆರೆ-ಕಟ್ಟೆಗಳು ತುಂಬಿ ಹರಿದರೆ ರೈತರು ಇನ್ನಷ್ಟು ಧೈರ್ಯದಿಂದ ಕೃಷಿ ಮಾಡಬಹುದು ಎಂದು ಕೆಲವರು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT