ಕೊಡಿಗೇನಹಳ್ಳಿ ಭಾಗದಲ್ಲಿ ವಾರದಿಂದ ಆಗಾಗ ಸಾಧಾರಣವಾಗಿ ಮಳೆ ಬೀಳುತ್ತಿತ್ತು. ಆದರೆ, ದಸರ ಹಬ್ಬದ ಮುಂಜಾನೆ ಸುರಿದ ಭಾರಿ ಮಳೆಗೆ ಹಳ್ಳ-ಕೊಳ್ಳ ತುಂಬಿ ಕೆರೆ-ಕುಂಟೆಗಳಿಗೆ ನೀರು ಹರಿದ ಪರಿಣಾಮ ಹಬ್ಬದ ಸಿದ್ಧತೆಯಲ್ಲಿದ್ದ ಜನ ಸಂತುಷ್ಟರಾದರು. ಹಿಂದಿನ ವರ್ಷ ಭೀಕರ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಪರದಾಡಿದ್ದರು. ಈ ವರ್ಷದ ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದರಿಂದ ಮುಂದೆ ಎಂತಹ ದಿನಗಳನ್ನು ಕಾಣಬೇಕೋ ಎಂಬ ರೈತರನ್ನು ಚಿಂತೆ ಕಾಡುತ್ತಿತ್ತು.