ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಮಳೆಯಿಂದಾಗಿ ಬೆಳೆಗೆ ಜೀವ ಕಳೆ

Last Updated 2 ಸೆಪ್ಟೆಂಬರ್ 2020, 6:38 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಕೆರೆ, ಕಟ್ಟೆ, ಹಳ್ಳ ಹಾಗೂ ಕಾಲುವೆಗಳಲ್ಲಿ ನೀರು ಹರಿದಿದೆ. ರೈತರ ಮುಖದಲ್ಲಿ ಸಂತಸ ಮೂಡಿದೆ.

ಪಟ್ಟಣದಲ್ಲಿ 63 ಮಿ.ಮೀ., ಮಿಡಗೇಶಿಯಲ್ಲಿ 90 ಮಿ.ಮೀ., ಐ.ಡಿ.ಹಳ್ಳಿಯಲ್ಲಿ 93 ಮಿ.ಮೀ., ಕೊಡಿಗೇನಹಳ್ಳಿಯಲ್ಲಿ 59 ಮಿ.ಮೀ. ಮಳೆಯಾಗಿದೆ.

ತಾಲ್ಲೂಕಿನ ಮಿಡಿಗೇಶಿ ಹಾಗೂ ಐ.ಡಿ.ಹಳ್ಳಿ ಹೋಬಳಿಯಲ್ಲಿ ಶೇಂಗಾ, ರಾಗಿ, ಅವರೆ, ಮೆಕ್ಕೆಜೋಳ ಬೆಳೆಗಳು ಮಳೆಯಿಲ್ಲದೇ ಒಣಗುವ ಹಂತ ತಲುಪಿದ್ದವು. ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ಜೀವ ಕಳೆ ಬಂದಿದೆ.

ಚೋಳೇನಹಳ್ಳಿ, ಬಿದರಕೆರೆ, ಮಿಡಿಗೇಶಿ, ರೆಡ್ಡಿಹಳ್ಳಿ, ಹನುಮಂತಪುರ, ಬೇಡತ್ತೂರು, ಹೊಸಕೆರೆ ಗ್ರಾಮದ ಕೆರೆ ಹಾಗೂ ಕಟ್ಟೆಗಳಿಗೆ ನೀರು ಹರಿದಿದೆ.

ಪಟ್ಟಣದ ಪಾವಗಡ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆ ಮಧ್ಯಭಾಗದಲ್ಲಿ ಗುಂಡಿ ಬಿದ್ದಿದೆ. ಸಾರ್ವಜನಿಕರು ಮರದ ಕೊಂಬೆಗಳನ್ನು ರಸ್ತೆಯಲ್ಲಿ ಇಟ್ಟು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT