ತಾಲ್ಲೂಕಿನ ಕಳ್ಳನಕೆರೆ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಮಳೆ ನೀರು ನುಗ್ಗಿದೆ. ದಿನಸಿ ಹಾಗೂ ಶಾಲಾ ದಾಖಲೆಗಳು ಮಳೆ ನೀರಿಗೆ ನೆನೆದಿದ್ದು ಮಕ್ಕಳು ಮತ್ತು ಗ್ರಾಮಸ್ಥರು ಕೊಠಡಿಯೊಳಗಿದ್ದ ನೀರನ್ನು ಹೊರ ಹಾಕಿದರು. ಮುಂಗಾರು ಹಂಗಾಮಿನಡಿ ಬಿತ್ತನೆಯಾಗಿದ್ದ ರಾಗಿ, ಜೋಳ, ತೊಗರಿ, ಅವರೆ, ಹರಳು, ಹುರುಳಿ, ಸಾಸಿವೆ, ಹುಚ್ಚೆಳ್ಳು ಬೆಳೆಗಳು ಮಳೆಯಿಲ್ಲದೆ ಕಳೆದ ಮೂರು ವಾರಗಳಿಂದ ನಲುಗಿದ್ದವು. ರಾಗಿ ಪೈರು ಒಣಗುವ ಹಂತಕ್ಕೆ ತಲುಪಿದ್ದು, ರೈತರನ್ನು ಆತಂಕಕ್ಕೆ ದೂಡಿತ್ತು. ತೆಂಗು, ಅಡಿಕೆ, ಬಾಳೆ ಬೆಳೆ ಮಳೆಯಿಲ್ಲದೆ ಸೊರಗಿದ್ದವು. ಮಳೆಯಿಂದಚೇತರಿಕೆ ಕಂಡಿವೆ.