ಹಿನ್ನೆಲೆ: ಗುಬ್ಬಿ ತಾಲ್ಲೂಕು ಇಡಕನಹಳ್ಳಿ ಗ್ರಾಮದ ಐ.ಎಸ್.ಶಂಕರಲಿಂಗಪ್ಪ ಎಂಬುವವರು ಇದೇ ಗ್ರಾಮದ ಲಿಂಗಣ್ಣ ಹಾಗೂ ಅವರ ಪುತ್ರಿ ಹುಂಜನಾಳು ಗ್ರಾಮದ ಜೈಶೀಲ ಅವರಿಂದ ₹ 4 ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಶೇ 10ರಷ್ಟು ಬಡ್ಡಿ ವಿಧಿಸಿದ್ದರು. ಶಂಕರಲಿಂಗಪ್ಪ ಬಡ್ಡಿ, ಸುಸ್ತಿ ಬಡ್ಡಿ, ದಂಡವನ್ನು ಕಟ್ಟಲು ತನ್ನ ಜಮೀನನ್ನೇ ಕಳೆದುಕೊಂಡರು ಎಂದು ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ಆರೋಪಿಸಿ ರಾಜ್ಯ ರೈತ ಸಂಘಟನೆ ಹಾಗೂ ಜಿಲ್ಲಾ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿತ್ತು.