ಚುನಾವಣೆಗೆ ಒಂದು ದಿನ ಬಾಕಿ ಇರುವಂತೆ ಶನಿವಾರ, ಮಲ್ಲೇಶ್ವರಂನಲ್ಲಿರುವ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದ ಅತೃಪ್ತ ಜಿಲ್ಲೆಗಳ ಪ್ರತಿನಿಧಿಗಳು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಲಿಖಿತ ದೂರನ್ನೂ ಸಲ್ಲಿಸಿದರು. ಚುನಾವಣೆಯ ಆದೇಶ, ಈ ಹಿಂದೆ ಹೈಕೋರ್ಟ್ ನೀಡಿದ ಆದೇಶ ಮತ್ತು ಅತೃಪ್ತ ಸಂಸ್ಥೆಗಳ ಮನವಿಯನ್ನು ಪರಿಶೀಲಿಸಿದ ನೋಂದಣಾಧಿಕಾರಿಗಳು ಚುನಾವಣೆ ಮುಂದೂಡುವ ನಿರ್ಧಾರ ಕೈಗೊಂಡರು.