‘ಇಲಾಖೆಯಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಖರ್ಚುಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತವೆ. ಸ್ಮಶಾನಗಳ ರಕ್ಷಣೆಯೂ ಸಾಧ್ಯವಾಗಿಲ್ಲ. ಪರಿಶಿಷ್ಟರು, ಬಡವರು ನೆಮ್ಮದಿಯಿಂದ ಶವ ಸಂಸ್ಕಾರ ಮಾಡಲೂ ಅವಕಾಶ ಕಲ್ಪಿಸಿಲ್ಲ’ ಎಂದು ಸಚಿವರು ಇಲಾಖೆ ಅಧಿಕಾರಿ ಪ್ರೇಮ ಅವರನ್ನು ಪ್ರಶ್ನಿಸಿದರು. ‘ಇಲಾಖೆಯಲ್ಲಿ ನನಗಿಂತ ನಿಮಗೆ ಹೆಚ್ಚು ಪ್ರಭಾವ ಇದೆ. ಪ್ರಗತಿ ಸಾಧ್ಯವಾಗದಿದ್ದರೆ ಇಲಾಖೆಯಲ್ಲಿ ನಿಮ್ಮ ಕೆಲಸ ಏನು? ಪ್ರಜ್ಞೆ ಇಲ್ಲದೆ ಕೆಲಸ ಮಾಡುತ್ತಿದ್ದೀರಿ, ಇದು ಕೆಲಸ ಮಾಡುವ ರೀತಿಯೇ? ಎಲ್ಲಿಗೆ ಹೋಗುತ್ತಿದೆ ಆಡಳಿತ? ನಾನು ಕುರ್ಚಿಯಿಂದ ಎದ್ದು ಬಂದರೆ ಏನಾಗುತ್ತದೆ ಗೊತ್ತಾ?’ ಎಂದು ಎಚ್ಚರಿಕೆ ನೀಡಿದರು.