ನಾಯಕ ಸಮುದಾಯದ ಅನಿಲ್ ಅವರನ್ನು ಕಣಕ್ಕಿಳಿಸಿದರೆ ಸಮುದಾಯದ ಮತಗಳ ಜತೆಗೆ ಪಕ್ಷದ ಬೆಂಬಲಿಗರು, ಪರಿಶಿಷ್ಟರು, ಹಿಂದುಳಿದ ವರ್ಗ ಹಾಗೂ ಒಕ್ಕಲಿಗ ಸಮುದಾಯದವರು ಕೈ ಹಿಡಿಯಬಹುದು. ರಾಜಕೀಯಕ್ಕೆ ಹೊಸ ಮುಖ ಪರಿಚಯಿಸಿ ಮತ ಕೇಳಿದರೆ ಅನುಕೂಲಕರವಾಗಬಹುದು. ಈಗಷ್ಟೇ ರಾಜಕೀಯಕ್ಕೆ ಬರುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ದ್ವೇಷ, ಜಂಟಾಟವೂ ಇರುವುದಿಲ್ಲ. ಕಾಂಗ್ರೆ
ಸ್, ಬಿಜೆಪಿ ಸಹ ಯುವ ಮುಖಗಳಿಗೆ ಅವಕಾಶ ನೀಡಿದರೆ ನಮ್ಮ ಅಭ್ಯರ್ಥಿಯೂ ಯುವಕರೇ ಎಂದು ಹೇಳಿ
ಕೊಂಡು ಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿ ಪಕ್ಷದ ವರಿಷ್ಠರು ತೊಡಗಿದ್ದಾರೆ.