ರೈಲ್ವೆ ಗೇಟ್ನಿಂದ ರಂಗಾಪುರ ಮಾರ್ಗವಾಗಿ ಮತ್ತು ಅನಗೊಂಡನಹಳ್ಳಿ, ಕೆರೆಗೋಡಿ, ದಸರಿಘಟ್ಟದ ಮಾರ್ಗವಾಗಿ ಸುಮಾರು 40 ಹಳ್ಳಿಗಳಿಂದ ಎಪಿಎಂಸಿ ಮಾರುಕಟ್ಟೆಗೆ ಸಂಪಕಿಸುವ ರಸ್ತೆ ಇದಾಗಿದೆ. ಹಲವಾರು ತಿಂಗಳಿನಿಂದ ರಸ್ತೆ ಸರಿ ಇಲ್ಲದ ಕಾರಣದಿಂದ 5- 6 ಕಿ.ಮೀ. ಸುತ್ತಿಕೊಂಡು ಬಂದು ಕೊಬ್ಬರಿ ತೆಗೆದುಕೊಂಡು ಹೋಗುವಂತಾಗಿದೆ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.