ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆ ಸ್ಫೋಟ: ವ್ಯಕ್ತಿ ಸಾವು

Last Updated 5 ಆಗಸ್ಟ್ 2020, 9:08 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಥರಟಿ ಗ್ರಾಮದ ಬಳಿ ಮಂಗಳವಾರ ಕಲ್ಲುಬಂಡೆ ಸ್ಫೋಟಿಸುವ ವೇಳೆ ಕಲ್ಲು ಸಿಡಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್ ರಾಜ್ಯದ ಸಾಯಬ್‌ ಖಾನ್ ಜಿಲ್ಲೆಯ ಕನ್ನಯ್ಯ (36) ಮೃತಪಟ್ಟವರು. ಬಾಗಲಕೋಟೆಯ ಗುರುನಾಥ, ತಮಿಳುನಾಡಿನ ರಾಜು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಥರಟಿ ಗ್ರಾಮದ ಸಮೀಪ ಜಗನ್ನಾಥಪುರ ಗ್ರಾಮದ ಸರ್ವೆ ನಂಬರ್‌ನಲ್ಲಿರುವ ದೇವರಬೆಟ್ಟದಲ್ಲಿ ತುಮಕೂರಿನ ಗ್ಯಾಸ್ ಬಾಬು ಎಂಬುವರ ಕಲ್ಲು ಗಣಿಗಾರಿಗೆಯಲ್ಲಿ ಸಿಡಿಮದ್ದು ಇಟ್ಟು ಕಲ್ಲು ಬಂಡೆ ಸಿಡಿಸುವಾಗ ಅವಘಡ ಸಂಭವಿಸಿದೆ. ಅತಿ ಎತ್ತರದ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವ ಕಾರಣ ಕಲ್ಲು ಪುಡಿಮಾಡಲು ಸ್ಫೋಟಕ ಬಳಸಲಾಗುತ್ತಿದೆ. ಇದರಿಂದ ಬೆಟ್ಟದ ಮೇಲಿಂದ ಕಲ್ಲುಗಳು ಸ್ಫೋಟಗೊಂಡು ಕೆಳಗೆ ಬೀಳುತ್ತವೆ.

‘ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳ ಅತ್ಯಂತ ಅಪಾಯಕಾರಿಯಾಗಿದ್ದು, ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಇಂತಹ ಜಾಗದಲ್ಲಿ ಕಲ್ಲುಗಣಿಗಾರಿಕೆಗೆ ಹೇಗೆ ಪರವಾನಗಿ ನೀಡಿದರು ಎಂಬುದು ಪ್ರಶ್ನೆಯಾಗಿದೆ. ಕಲ್ಲು ಸ್ಫೋಟಕ ಬಳಸಲು ಪರವಾನಗಿ ಪಡೆದಿದ್ದಾರೆಯೇ? ಇಲ್ಲವೇ ಎಂಬುದನ್ನು ಪರಿಶೀಲಿಸಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಎಫ್.ಕೆ.ನದಾಫ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT