ಕೈಗೆ ಸಿಕ್ಕದ ಅಧಿಕಾರಿಗಳು: ಗ್ರಾಮ ಪಂಚಾಯಿತಿಯಿಂದ ಈ ಎರಡು ಗ್ರಾಮಗಳಿಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ತಹಶೀಲ್ದಾರ್ ಅವರನ್ನು ಕೇಳಿದರೆ ನೀರು ಪೂರೈಕೆ ಇಲಾಖೆ ಎಇಇಗೆ ಬಳಿ ಹೋಗಿ ಎನ್ನುತ್ತಾರೆ. ಹೊಸದಾಗಿ ಬಂದಿರುವ ಎಇಇ ಸಮರ್ಪಕ ಉತ್ತರ ನೀಡುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೈಗೆ ಸಿಕ್ಕುತ್ತಿಲ್ಲ ಎಂದು ಪಾತಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ ದೂರುವರು.