ತುಮಕೂರು: ವರನಟ ರಾಜ್ಕುಮಾರ್ ಅವರ ಚಲನಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂದೇಶಗಳು ಇರುತ್ತಿದ್ದ ಕಾರಣದಿಂದಲೇ ಅಂದಿನ ಯುವ ಸಮೂಹ, ಅವರನ್ನು ಮಾದರಿಯಾಗಿಸಿಕೊಂಡಿತ್ತು ಎಂದು ಶಾಸಕ ಬಿ.ಜಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ಹೊರಪೇಟೆಯಲ್ಲಿ ಜಿಲ್ಲಾ ‘ಶತಶೃಂಗರಾಜ ಡಾ.ರಾಜ್ಕುಮಾರ್ ಕನ್ನಡ ಅಭಿಮಾನಿಗಳ ಸಂಘ’ ಹಮ್ಮಿಕೊಂಡಿದ್ದ ರಾಜ್ಕುಮಾರ್ ಅವರ 92ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಸಂಘ ಸಾಂಕೇತಿಕವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಿದೆ. ಈ ಹಿಂದೆ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸುತ್ತಿತ್ತು ಎಂದರು.
ಅಭಿಮಾನಿ ಬಳಗದ ಅಧ್ಯಕ್ಷ ಹರಳೂರು ಶಿವಕುಮಾರ್ ಮಾತನಾಡಿದರು. ಟಿ.ಜಿ.ಬಸವರಾಜು, ಮಲ್ಲಪ್ಪ, ಟಿ.ಸಿ.ದಯಾನಂದ್, ಕೊಪ್ಪಳ್ ನಾಗರಾಜು, ಬಂಬೂ ಮೋಹನ್, ಲಕ್ಷ್ಮಣ್, ಮನು ಹರಳೂರು, ಜೀವನ್ ಆಚಾರ್, ರವಿ ಮಲ್ಲಣ್ಣ ಇದ್ದರು.