ತುಮಕೂರು: ಸ್ಪರ್ಶ ಜಾತಿಗಳನ್ನು ಪರಿಶಿಷ್ಟ ಜಾತಿಪಟ್ಟಿಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿ ಮತ್ತು ಛಲವಾದಿ ಮಹಾಸಭಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸ್ಪರ್ಶ ಜಾತಿಗಳಾದ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಜಾತಿಗಳು ಇವೆ. ಈ ಜಾತಿಗಳು ರಾಷ್ಟ್ರಪತಿ ಪಟ್ಟಿಯಲ್ಲಿ ನಮೂದಾಗಿಲ್ಲ. ಆದ್ದರಿಂದ ಈ ಜಾತಿಗಳನ್ನು ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.
ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ, ಜಿಲ್ಲಾ ಘಟಕದ ಡಿ.ಸಿ.ರಾಜಣ್ಣ, ಎ.ನಾಗೇಶ್, ಬಂಡೆ ಕುಮಾರ್, ಪಾವಗಡ ರಾಮಾಂಜಿ, ಗೂಳೂರು ರಾಜಣ್ಣ, ಇನಕನಹಳ್ಳಿ ಮೂರ್ತಣ್ಣ, ಶಿವು, ಮಾಗೋಡು ಯೋಗಾನಂದ, ಮಹಾಲಿಂಗಯ್ಯ, ಕೃಷ್ಣಪ್ಪ ಇದ್ದರು.