ಶಾಲೆಗೆ ಸುಸಜ್ಜಿತ ಕಟ್ಟಡ ಇದ್ದು, ಶಿಕ್ಷಕರ ಸಮಸ್ಯೆಯಿಂದಾಗಿ ದೂರದೂರಿಗೆ ಹೋಗಬೇಕಾಗಿ ಬಂದಿರುವುದನ್ನು, ಬಳಕೆಯಾಗದ ಕಾರಣ ಕಟ್ಟಡ ಶಿಥಿಲವಾಗುತಿದ್ದುದನ್ನು ಮತ್ತು ಶಾಲೆಯನ್ನು ಕೇವಲ ಮತಗಟ್ಟೆಯಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದ್ದನ್ನು ಗಮನಿಸಿದ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ತಿಮ್ಮಣ್ಣ, ನರಸಿಂಹಮೂರ್ತಿ ಮತ್ತು ಗ್ರಾಮಸ್ಥರು ಶಾಲೆ ಮತ್ತೆ ಆರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿ ದುಂಬಾಲು ಬಿದ್ದರು.