ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ, ದೂರು ನೀಡಿದರೂ ತುರ್ತು ಕ್ರಮ ಕೈಗೊಳ್ಳದೇ ಠಾಣಾಧಿಕಾರಿಗಳು ಕಾಲಹರಣ ಮಾಡುವುದು, ದಲಿತರ ದೂರುಗಳನ್ನು ಉಪೇಕ್ಷೆ ಮಾಡುವುದು, ಪ್ರತಿ ದೂರು ಇತ್ಯರ್ಥಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ಮನವಿ ಮಾಡಬೇಕಾದ ಸ್ಥಿತಿ ಎದುರಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎಸ್ಸಿಎಸ್ಟಿ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹೇಳಿಕೊಂಡರು.