ಮಂಗಳವಾರ ಸಂಜೆ ಈ ರಸ್ತೆಯಲ್ಲಿ ಬಂದ ಶಾಸಕ ಬಿ.ಸತ್ಯನಾರಾಯಣ ಡಿಜಿಟಲ್ ಬೋರ್ಡ್ ಅನ್ನು ಗಮನಿಸಿ ಕೋಪಗೊಂಡ ಅವರು, ‘ಕ್ಷೇತ್ರದ ಜನ ಮತ ನೀಡಿ ಸೇವೆ ಮಾಡಲು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಅಧಿಕಾರಿಗಳಿಗೆ ಇನ್ನು ಸಹ ಶಾಸಕರು ಯಾರು ಎನ್ನುವುದು ತಿಳಿದಿಲ್ಲವೇ’ ಎಂದು ನಗರಸಭೆ ಪೌರಾಯುಕ್ತ ಗಂಗಣ್ಣ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.